ಕಲ್ಲು ಗುಡ್ಡದಲ್ಲೂ ಕದರು ಕಂಡವರು
ಹಾಗಾಗೆ ಬರಡು ಭೂಮಿ ಈಗ
ನಂದನವನ
ದಾರಿಹೋಕರಿಗೆ ಹೊರಗಿನ ಚೆಂದ
ಕಾಣುವುದಷ್ಟೇ
ಆದರೆ ಅವರುಂಡಿದ್ದು ಬರಿಯ
ಕಷ್ಟ-ನಷ್ಟ ಮಾತ್ರ
ಬಿತ್ತುವುದಿಲ್ಲ ಎನ್ನುತ್ತಾ ಮತ್ತೆ
ಬಿತ್ತಿದರು, ಊಳಿದರು
ಅರಿ ಮಾಡಿದರು
ಹೀಗಿದ್ದು
ಕಣಜ ತುಂಬಿ ರತ್ನಗಂಬಳಿ
ಹೊದ್ದುಕೊಳ್ಳಲಿಲ್ಲ
ಬದಲು ಒಡಲ ಹಾಹಾಕಾರಕ್ಕೆ
ಹಾರೈಕೆಯಾದರು.
ತಂಪುಣಿಸಿ ತಣಿಸಿದರು ನೆಲದವ್ವನ
ಧಮನಿಯೊಳಗಣ ರುಧಿರ
ಬೆವರಹನಿ ಹರಿಸಿ
ದಿನದಿನಕ್ಕೆ ಕುಣಿಕೆಯ
ಬಲ ಒತ್ತಾಯ ಹೆಚ್ಚಾಗಿತ್ತೋ?
ಕೈಯ ಬಲ ನೆಲಮುಖಿಯಾಯ್ತೋ?
ನೆಲದ ಚೆಲುವು ಶಾಶ್ವತವೆನಿಸಿತೋ?
ಒಂದು ಅಳಿದರೆ ಮತ್ತೊಂದು
ಉಳಿದಿತೆಂದೋ?
ಬಿಗಿದುಕೊಂಡರು ಕೊರಳ ಸೆರೆ
ಬಿಟ್ಟು ಹೊರಟರು ಎಲ್ಲ ಹೊರೆ
*****
Related Post
ಸಣ್ಣ ಕತೆ
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…